ಭಟ್ಕಳ: ನಾಮಧಾರಿ ಸಮಾಜದ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಹಾಗೂ ಪಾಲಕಿ ಮಹೋತ್ಸವ ಕಾರ್ಯಕ್ರಮವು ಫೆಬ್ರವರಿ 2 ರಿಂದ 5 ರ ತನಕ ನಡೆಯಲಿದೆ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಹೇಳಿದರು.
ಅವರು ಸೋಮವಾರದಂದು ಇಲ್ಲಿನ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಫೆಬ್ರವರಿ 2 ರವಿವಾರದಂದು ದೇವಸ್ಥಾನದ ಪ್ರಧಾನ ಅರ್ಚಕರ ನೇತ್ರತ್ವದಲ್ಲಿ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವರ 8ನೇ ಪುನರ್ ಪ್ರತಿಷ್ಠಾಂಗದ ವರ್ಧಂತಿ ಮಹೋತ್ಸವ ನಡೆಯಲಿದ್ದು, ಸಕಲ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.
ಫೆಬ್ರವರಿ 3 ಸೋಮವಾರದಂದು ಸಂಜೆ 7 ಗಂಟೆಗೆ ಶ್ರೀ ಪದ್ಮಾವತಿ ಅಮ್ಮನವರ ಪಾಲಕಿಯ ಆಗಮನ ಆಗಲಿದೆ.
ಫೆಬ್ರವರಿ 4 ರಂದು ಮುಂಜಾನೆ ಗಣಪತಿ ಪೂಜೆ, ವಿಶ್ವಕ್ಸೇನಾರಾಧನೆ, ಪುಣ್ಯಹವಾಚನ, ಮಹಾ ಸಂಕಲ್ಪ, ಕಳಶಾರಾಧನೆ, ಗಣಹೋಮ ಹಾಗೂ ದೇವರಿಗೆ ತುಲಾಭಾರ ಸಮರ್ಪಣೆ, ಬೆಳಿಗ್ಗೆ 10.30ಕ್ಕೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಪೂಜ್ಯ ಗುರುಗಳಿಂದ ಶಿರ್ವಚನ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ.ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಮಹಾ ಮಂಗಳಾರತಿ, 1 ಗಂಟೆ ಯಿಂದ 3 ಗಂಟೆತ ತನಕ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 3.30 ರಿಂದ ಶ್ರೀ ದೇವರ ಪಾಲಕಿ ಮೆರವಣಿಗೆ ನಡೆಯಲಿದ್ದು, ರಾತ್ರಿ 11 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಈ ಎಲ್ಲಾ ಕಾರ್ಯಕ್ರಮಕ್ಕೆ ಎಲ್ಲಾ ಸಮಾಜದ ಜನರು ಭಾಗವಹಿಸಿ ದೇವರ ಕ್ರಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದರು.
ಫೆಬ್ರವರಿ 5 ರಂದು ಬೆಳಿಗ್ಗೆ 8.30 ಗಂಟೆಗೆ ಶ್ರೀ ದೇವರಿಗೆ ಓಕಳಿ ಸೇವೆ (ಅವಭ್ರತ ಸ್ನಾನ), 11 ಗಂಟೆಗೆ ಫಲಾವಳಿ ವಸ್ತುಗಳ ವಿಲೇವಾರಿ, ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ರಾತ್ರಿ 9.30 ಕ್ಕೆ ತ್ರಿನೇತ್ರ ಕಲಾತಂಡ ಉಪ್ಲಾಡಿ ಇವರಿಂದ ಸಾಮಾಜಿಕ ನಾಟಕ “ಪಂಚ ದೀವಟಿಗೆ’ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಶ್ರೀ ದೇವರ ಪಾಲಕಿ ಉತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಿಸುವವರು ಫೆಬ್ರವರಿ 2 ರಿಂದ 3 ರ ಒಳಗೆ ಸಮರ್ಪಿಸಿ ಶ್ರೀ ದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಹೇಳಿದರು.
ಬಳಿಕ ಮಾತನಾಡಿದ ಕೃಷ್ಣ ನಾಯ್ಕ ಆಸರಕೇರಿ ಈ ಕಾರ್ಯಕ್ರಮಕ್ಕೆ ನಾಮಧಾರಿ ಸಮಾಜ ಬಾಂಧವರು ಸೇರಿ ತಾಲೂಕಿನ ಎಲ್ಲಾ ಸಮಾಜದವರು ಕೂಡ ಭಾಗವಹಿಸಿಸಬೇಕು . ಈಗಾಗಲೇ ಬೇರೆ ಸಮಾಜದ ಮುಖಂಡರಿಗೆ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ಮಾಡುತ್ತೇವೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂದವರು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಕ್ರಷ್ಣ ನಾಯ್ಕ ಆಸರಕೇರಿ, ಪ್ರಕಾಶ ನಾಯ್ಕ, ಶಂಕರನಾಯ್ಕ ಎಮ್.ಕೆ.ನಾಯ್ಕ,ಮಹಾಬಲೇಶ್ರ ನಾಯ್ಕ, , ಶ್ರೀಧರ ನಾಯ್ಕ, ವಿಠ್ಠಲ ನಾಯ್ಕ ಮುಂತಾದ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.